ಅಂತರ್ಜಾಲದಲ್ಲಿ ಇಂದು ಕನ್ನಡ ಬಳಕೆ ಹೆಚ್ಚಾಗಿದೆ. ಅದಕ್ಕಿಂತಲೂ ಮುಖ್ಯವಾಗಿ ಕನ್ನಡದ ಬ್ಲಾಗ್ಗಳು ನಳನಳಿಸಲಾರಂಭಿಸಿವೆ. ವಿಭಿನ್ನ ಅನುಭವಗಳ ಮೂಸೆಯಿಂದ ಹೊರಬಂದ ಬರಹಗಳು ಕಂಗೊಳಿಸುತ್ತಾ, ಹೊಸದೊಂದು ಸಾಹಿತ್ಯ ಚಳವಳಿಯನ್ನೇ ಹುಟ್ಟು ಹಾಕುವ ಭರವಸೆ ಮೂಡಿಸಿದೆ ಎಂದರೆ ಅಚ್ಚರಿಯಿಲ್ಲ.
ಇಂಥದ್ದರ ನಡುವೆ ಬರೀ ನಮ್ಮ ಅಂಚೆಗಳ ಮೂಲಕವೇ ಪರಿಚಯವಾಗಿದ್ದೇವೆ ; ಮುಖತಃವಲ್ಲ. ಅದಕ್ಕೇ ಎಲ್ಲರೂ ಸೇರಿದರೆ ಹೇಗೆ ಎಂಬ ಚಿಂತನೆ ಹರಿದು ಬಂದಿದೆ. ಇದಕ್ಕಾಗಿ ಮಾ. ೧೬ ರ ಸಂಜೆ ೪ ಕ್ಕೆ ಕುಶಲ ಭೇಟಿ ಏರ್ಪಡಿಸಲಾಗಿದೆ. ವಿವರಗಳು ಸುಶ್ರುತರ ಆಮಂತ್ರಣದಲ್ಲಿದೆ.
ಸುಶ್ರುತರ ಪತ್ರ [...]
