ಗೆಳೆಯರೇ,
ಪತ್ರಿಕೋದ್ಯಮ ನಮ್ಮ (ಮನುಷ್ಯನ) ಆವಿಷ್ಕಾರಗಳಲ್ಲಿ ಮಹತ್ವದ್ದು. ತನ್ನ ಸುತ್ತಲಿನ ಆಗುಹೋಗುಗಳನ್ನು ತಿಳಿದುಕೊಳ್ಳಬೇಕೆನ್ನುವ ಆಸಕ್ತಿಯೇ ನಮ್ಮ ಚಲನಶೀಲತೆಯನ್ನು ಪ್ರತಿನಿಧಿಸಬಲ್ಲದು. ಅಂಥದೊಂದು ಅಗತ್ಯತೆಯನ್ನು ಕಂಡುಕೊಂಡು ಆ ನೆಲೆಯಲ್ಲಿ ನಾವು ಹತ್ತು ಹಲವಾರು ಸುಧಾರಣೆಗಳನ್ನು ಮಾಡಿಕೊಳ್ಳುತ್ತಾ ಸಾಗಿದ್ದೇವೆ.
ಇಂದು ಮಾಧ್ಯಮ ಹತ್ತಾರು ದೃಷ್ಟಿಕೋನಗಳಲ್ಲಿ ರೂಪುಗೊಳ್ಳುತ್ತಾ ಬೆಳೆಯುತ್ತಿದೆ. ಪರಿಸರದಲ್ಲಾಗುವ ಬದಲಾವಣೆಗಳೆಲ್ಲಾ ಇದರ ಮೇಲೂ ಪರಿಣಾಮ ಬೀರಿದೆ. ಅದನ್ನೆಲ್ಲಾ ನೀಗಿಸಿಕೊಂಡು ಬಹಳ ವಿಸ್ತೃತವಾಗಿ ಮಾಧ್ಯಮ ಬೆಳೆಯುತ್ತಿದೆ. ಆದರೆ ಕಳೆದ ಹತ್ತು ವರ್ಷಗಳಲ್ಲಿ ತಂತ್ರಜ್ಞಾನ ಮಾಧ್ಯಮ ಕ್ಷೇತ್ರದಲ್ಲಿ ತಂದಿರುವ ಬದಲಾವಣೆ-ಸುಧಾರಣೆ ಅತೀವವಾದದ್ದು. ಹತ್ತು ವರ್ಷಗಳ ಹಿಂದಿನ ಸುದ್ದಿಮನೆಯ ಚಿತ್ರಣವೇ ಇಂದು ಬದಲಾಗಿ ಹೋಗಿದೆ.
ತಂತ್ರಜ್ಞರಂತೆಯೇ “ಸ್ಟಿಫ್’ ಆಗಿ ಕಾಣುವ ಸುದ್ದಿಯ ಮನೆಯೊಳಗಿನವರು ಬಹಳ ನಾಜೂಕುತನ ರೂಢಿಸಿಕೊಂಡಿದ್ದಾರೆ. ಕಾರ್ಯ ಶೈಲಿಯಲ್ಲೂ ಹೊಸತನ ಬಂದಿದೆ. ಪತ್ರಿಕೋದ್ಯಮ ನಿಂತ ನೀರಾಗದೇ ಹರಿಯುವ ನದಿಯಾಗುವತ್ತ ಸಾಗಿದೆ. ತಂತ್ರಜ್ಞಾನ ನಮ್ಮ ಜೀವನದ ಪ್ರತಿ ಹಂತದಲ್ಲಿಯೂ ತಂದಿರುವ ಬದಲಾವಣೆಗಳು ಅಪಾರ. ಆದರೆ ಅದು ಮಾಧ್ಯಮ ಕ್ಷೇತ್ರದಲ್ಲಿ ಲೆಕ್ಕವಿಲ್ಲದಷ್ಟು ಆಗಿದೆ. ಮಾಧ್ಯಮ ಬೆಳೆದಿರುವ ರೀತಿಯೂ ಅಗಾಧ. ಭಾರತೀಯ ಪತ್ರಿಕೋದ್ಯಮದಂತೆಯೇ ನಮ್ಮ ಕನ್ನಡ ಪತ್ರಿಕೋದ್ಯಮದಲ್ಲೂ ಒಂದಿಷ್ಟು ಬದಲಾವಣೆಗಳಾಗಿವೆ.
ಉದಾರೀಕರಣ, ಜಾಗತೀಕರಣದ ಗಾಳಿಯಿಂದ ಪಲ್ಲಟದ ಅಲೆಗಳು ಎದ್ದಿರುವುದು ನಿಜ. ಸಹಜವಾಗಿ ನಡೆದುಹೋಗುತ್ತಿದ್ದವ ಇದ್ದಕ್ಕಿದ್ದಂತೆ ಎದುರಾಗುವ ವೃತ್ತದಲ್ಲಿನ ಗೊಂದಲವನ್ನು ನಮ್ಮ ಮಾಧ್ಯಮ ಕ್ಷೇತ್ರವೂ ಎದುರಿಸುತ್ತಿದೆ ; ಪತ್ರಕರ್ತರೂ ಸಹ. ದೃಶ್ಯ ಮಾಧ್ಯಮ, ಮುದ್ರಣ ಮಾಧ್ಯಮದ ನಡುವಿನ ಪೈಪೋಟಿ ಸಹ ಹೆಚ್ಚಿದೆ. ಹಿಂದಿಗಿಂತಲೂ ಈಗ ಪತ್ರಕರ್ತರು ಹೆಚ್ಚು “ಬ್ಯುಸಿ’ಯಾಗಿದ್ದಾರೆ. ಬ್ರೇಕಿಂಗ್ ನ್ಯೂಸ್ನತ್ತ ಗಮನ ನೆಟ್ಟಿದ್ದಾರೆ.
ಸೆನ್ಸೇಷನ್ ಜರ್ನಲಿಸಂನಂಥ ಅಪವಾದ ಬರುತ್ತಿರುವುದೂ ನಿಜ. ಸುದ್ದಿಯ ನೆಲೆಯಲ್ಲಿ ಇದ್ದ ವ್ಯತ್ಯಾಸ ದೂರವಾಗುತ್ತಿದೆಯೇನೋ? ಮಾಧ್ಯಮಗಳು ನಮ್ಮ ಬದುಕಿಗೆ ಸಂವಾದವಾಗಿ ಪರಿಣಮಿಸುತ್ತಿಲ್ಲವೇನೋ? ಸುದ್ದಿಯ ವೈಭವೀಕರಣದತ್ತ ಮಾಧ್ಯಮಗಳು ಹೊರಟಿವೆಯೇ? ಇಂಥ ಹತ್ತು ಹಲವು ಪ್ರಶ್ನೆಗಳು ಉದ್ಭವಿಸಿವೆ. ಇದೆಲ್ಲದರ ಮಧ್ಯೆ ಈ “ಸಂವಾದ’ ಆರಂಭಿಸಿದ್ದೇನೆ.
ನನ್ನ ಉದ್ದೇಶ ಯಾವುದೇ ವಿವಾದವನ್ನು ಹುಟ್ಟು ಹಾಕುವುದಲ್ಲ. ನಮ್ಮ ಕ್ಷೇತ್ರದ ಬಹಳಷ್ಟು ಬದಲಾವಣೆಗಳು, ಕ್ಷೇತ್ರದ ಒಳ-ಹೊರಗುಗಳು ಬಹಳಷ್ಟು ಮಂದಿಗೆ ತಿಳಿದೇ ಇರುವುದಿಲ್ಲ. ನಮ್ಮ ಕಾರ್ಯ ಕ್ಷೇತ್ರದಲ್ಲಿನ ಒತ್ತಡ, ಡೆಡ್ಲೈನ್ ಮುಟ್ಟಲು ಪಡುವ ಶ್ರಮ-ಎಲ್ಲವೂ ಅಪೂರ್ವ. ನಾನು ಈ ಕ್ಷೇತ್ರವನ್ನು ಬಯಸಿಯೇ ಬಂದಿದ್ದು. ನನ್ನ ಅನಿಸಿಕೆಯಲ್ಲಿ ಯಾವುದೇ ಕ್ಷೇತ್ರದಲ್ಲಿ ದುಡಿಯುವುದು ನಮಗೆ ಅನಿವಾರ್ಯವೆನಿಸಿದರೆ ಅದು ಜೀತವೆನಿಸದು. ಒಂದು ನಿರ್ದಿಷ್ಟ ನಿಯಮಗಳಡಿ ಸೀಮಿತತೆಯ ವ್ಯಾಪ್ತಿ ಅರಿತು ಕಾರ್ಯ ಮಾಡುವುದು ನನ್ನ ದೃಷ್ಟಿ. ಅದರೊಳಗೆ ನನಗೆ ಇಷ್ಟವಾಗುವ ಸೃಷ್ಟಿ ಸಾಧ್ಯವೇ ಎಂದು ಪ್ರಯತ್ನಿಸುತ್ತೇನೆ, ಅಷ್ಟೇ. ನಾನು ಸದಾ ಪ್ರಯತ್ನದಲ್ಲಿ ಮಾತ್ರ ವಿಶ್ವಾಸವಿಡುತ್ತೇನೆಯೇ ಹೊರತು ಪರಿಣಾಮದಲ್ಲಲ್ಲ. ಜಗತ್ತಿನಲ್ಲಿಯೂ ಸಹ. ಇದುವರೆಗೆ ಎಲ್ಲರ ಪ್ರಯತ್ನಗಳಿಗೆ ಬೆಲೆ ಕಟ್ಟಿದ್ದಾರೆಯೇ ಹೊರತು ಪರಿಣಾಮಕ್ಕಲ್ಲ.
ಮೊನ್ನೆ ಹತ್ತು ಉಪಗ್ರಹಗಳನ್ನು ಒಮ್ಮೆಲೆ ಗಗನಕ್ಕೆ ಚಿಮ್ಮಿಸಿದ ಇಸ್ರೋ ಸಾಧನೆ ಆ ಪ್ರಯತ್ನದಲ್ಲಿಯೇ ಹೊರತು ಹತ್ತು ಉಪಗ್ರಹದಲ್ಲಲ್ಲ. ಈ “ಸಂ-ವಾದ’ ದಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಿನ ಕುತೂಹಲವನ್ನು ಕೇಳಬಹುದು. ಸಾಧ್ಯವಾದಷ್ಟು ಉತ್ತರಿಸಲು ಪ್ರಯತ್ನಿಸುತ್ತೇನೆ. ಅನಗತ್ಯ ವಿವಾದ ಹುಟ್ಟುಹಾಕಬೇಕೆಂದೇ ಸಂಶಯ ಬಂದರೆ ಉತ್ತರಿಸುವುದು ಕಷ್ಟ. ನಿರ್ದಿಷ್ಟ ಸಂಸ್ಥೆ, ವ್ಯಕ್ತಿ ಬಗೆಗಿನ ಕುತೂಹಲಕ್ಕಿಂತಲೂ ಕ್ಷೇತ್ರದ ಬಗೆಗಿನ ವಿಸ್ತೃತ ನೆಲೆಯಲ್ಲಿದ್ದರೆ ಚೆನ್ನ. ಸಂವಾದದ ಆಶಯದಲ್ಲೇ ಇದು ಸಾಗಬೇಕೆಂಬುದು ನನ್ನ ಬಯಕೆ.
ಕೆಲವು ಪತ್ರಿಕೋದ್ಯಮ ವಿದ್ಯಾರ್ಥಿಗಳೂ ಇಂಥದೊಂದು ಸಂವಾದ ಸೂಕ್ತ ಎಂದೂ ಹೇಳಿದರು. ಅದೂ ನನ್ನ ಪ್ರಯತ್ನಕ್ಕೆ ಆಶ್ರಯವಾಯಿತು. ಪ್ರಚಲಿತ ವಿದ್ಯಮಾನದಿಂದ ಹಿಡಿದು, ಸುದ್ದಿ ಮನೆಯೊಳಗಿನ ವಿನ್ಯಾಸ, ಕೌತುಕ ಬಗ್ಗೆ ನಾನು ಅಭಿಪ್ರಾಯವನ್ನು ಹಂಚಿಕೊಳ್ಳಬಲ್ಲೆ.
ಪ್ರೀತಿಯಿಂದ
ಚೆಂಡೆಮದ್ದಳೆ
Uttam prayatn,
suddimane nanagU kautukada vishaya…
pritiyirali
Shettaru
ಶೆಟ್ಟರೇ,
ಶೂಟ್ ಶುರು ಮಾಡಿ.
ನಾವಡ
ಆಯ್ತು ನಾವಡರೆ,
ಸುದ್ದಿ ಮೂಲ ಹೇಗೆ ಹುಡುಕುತ್ತಿರಿ ಮತ್ತು ಅದರ ಸತ್ಯಾಸತ್ಯ್ಗಳ ಶೋಧನೆ ಹೇಗೆ?
ಪ್ರೀತಿಯಿರಲಿ
ಶೆಟ್ಟರು
naavudare
tumba hinde naanu dvg yavara vryttapatrikegalu annuva pustka odidde. ivaatu aa pustakada tirulaada suddimaneyalle nanna jeetha. patrikodyama belledu vistrutagolluvadar jotege avanatiyattanu saaguttide embudu nanna bhava. aa diseyalli nimma ee ota ekamukhavaagi saagade idi patrikodyama handara vivarisali annuvudu nanna aashya.
ಶೆಟ್ಟರಿಗೆ
ದಯವಿಟ್ಟು ಮನ್ನಾ ಮಾಡಿ ( ಈಗ ಚುನಾವಣೆ ಕಾಲ. ಎಲ್ಲ ಮನ್ನಾ ಮಾಡೋ ಸಮಯ!). ನಾಳೆ ನಿಮ್ಮ ಪ್ರಶ್ನೆಗೆ ಉತ್ತರಿಸುತ್ತೇನೆ. ನಮ್ಮಲ್ಲಿ ಮೊದಲ ಹಂತದ ಚುನಾವಣೆ ಆಗಿರುವುದರಿಂದ ಬ್ಲಾಗ್ ಕಡೆ ನೋಡೋದೇ ಕಷ್ತವಾಗಿದೆ. ಧನ್ಯವಾದಗಳೊಂದಿಗೆ,
ವಿನಾಯಕ,
ನನಗ್ಯಾಕೋ ನಿಮ್ಮ ಬ್ಲಾಗ್ ನಲ್ಲಿದ್ದ (ಅಕ್ಷರ ವಿಹಾರ ನಿಮ್ಮದೇ ಬ್ಲಾಗ್ ಅಂದ್ಕೊಂಡಿದ್ದೇನೆ) ಜೀತ ಪದ ಹಿಡಿಸಿರಲಿಲ್ಲ. ನಿಮ್ಮ ಕಾಮೆಂಟ್ ನಲ್ಲಿರೋ ಅದೇ ಪದ ಹಿಂಸೆ ಅನಿಸುತ್ತೆ. ಎಲ್ಲಿ ಹಿಂಸೆ ಅನ್ನಿಸುತ್ತೋ ಅಲ್ಲಿ ಇರಬಾರದು ಅನ್ನೋದು ನನ್ನ ಅನಿಸಿಕೆ. ಆ ದಿಕ್ಕಿನಲ್ಲೇ ಹೋಗೋ ಪ್ರಯತ್ನ ಸಹ.ನಾವು ಆಯ್ಕೆ ಮಾಡಿಕೊಂಡ ಕ್ಷೇತ್ರ ನಮಗೆ ಖುಶಿ ಕೊಡುವಂತಿರಬೇಕು. ಅದು ಖುಶಿ ಕೊಡದೇ ಹಿಂಸೆ ಕೊಡ್ತಿದ್ರೆ ಅದನ್ನು ಬಿಟ್ಟು ಬೇರೆದನ್ನು ಆರಿಸಿಕೊಳ್ಳಬೇಕು. ಆ ಸಾಮರ್ಥ್ಯವಿಲ್ಲದಿದ್ದರೆ ಅನಿವಾರ್ಯವಾಗಿ ಅದನ್ನು ಒಪ್ಪಿಕೊಂಡು ಇರೋದ್ರಲ್ಲಿ ಖುಷಿನಾ ಹುಡುಕೊಳ್ಳಬೇಕು. ಇಲ್ಲದೇ ಇದ್ರೆ ಇರೋದನ್ನೂ ನೋಡಲಿಕ್ಕಾಗದ ಮನಃಸ್ಥಿತಿ ನಮ್ಮೊಳ್ಗೆ ಬೆಳೆಯುತ್ತೆ. ಅದು ಅಪಾಯಕಾರಿ ಕೂಡ. ಇದು ಉಪದೇಶವಂತಲ್ಲ. ಹಾಗೆ ತಿಳ್ಕೊಬೇಡಿ. ನಿಮ್ಮ ಬ್ಲಾಗ್ ನಲ್ಲಿ ನೋಡ್ದಾಗ ಅನಿಸಿತ್ತು. ಅದನ್ನು ಇಲ್ಲಿ ಬರೆದೆ. ನೋವಾದರೆ ಮನ್ನಿಸಿಬಿದಿ.
ಕ್ಷೇತ್ರದ ಬೆಳವಣಿಗೆಯೊಂದಿಗೆ ನಮ್ಮನ್ನು ಗುರುತಿಸಿಕೊಳ್ಳದೇ ಹೋದಾಗ ನಾವೆಲ್ಲೋ, ಅದೆಲ್ಲೋ ಅನ್ಸುತ್ತೆ. ಆದರೆ ಈ ಅಂಕಣದಲ್ಲಿ ಪತ್ರಿಕೋದ್ಯಮದ ಬೇರೆ ಮಜಲುಗಳನ್ನು ಪರಿಚಯಿಸೋಕೆ ಪ್ರಯತ್ನಿಸುತ್ತೇನೆ. ಯಶಸ್ವಿಯಾಗುತ್ತೇನೋ ಎಂಬುದು ಗೊತ್ತಿಲ್ಲ.
ನಾವಡ
ನಾವಡರೇ,
ಪತ್ರಿಕೋದ್ಯಮ ನನ್ನ ಅನೇಕ ಆಸಕ್ತಿ ಹಾಗೂ ಕುತೂಹಲಗಳಲ್ಲಿ ಒಂದು. ಮೊದಲು ಆ ಕ್ಷೇತ್ರದ ಕೆಲವು ವ್ಯಕ್ತಿಗಳಿಂದ ಶುರುವಾದ ಕುತೂಹಲ ಕ್ರಮೇಣ ಆ ಕ್ಷೇತ್ರದ ಬಗೆಗೂ ಹಬ್ಬಿತು.
ಪತ್ರಿಕೆಗಳಲ್ಲಿ ಸುದ್ದಿ ಮೂಲಗಳು ಯಾವುವು? ಅಂತರಾಷ್ಟ್ರೀಯ ಸುದ್ದಿ, ರಾಷ್ಟ್ರೀಯ ಸುದ್ದಿ, ಪ್ರಾದೇಶಿಕ ಸುದ್ದಿ… ಇವುಗಳಿಗಾಗಿ ಪತ್ರಿಕೆಗಳು ಯಾವ ಸುದ್ದಿ ಮೂಲಗಳನ್ನು ಅವಲಂಬಿಸಿರುತ್ತವೆ. ಇನ್ನು ಅನಧಿಕೃತ ಸುದ್ದಿ ಮೂಲಗಳೆಂಬವು ಇರುತ್ತವೆಯೇ? ಟ್ಯಾಬ್ಲಾಯ್ಡ್ ಪತ್ರಿಕೋದ್ಯಮದ ರೂಪುರೇಷೆಗಳು ಎಂಥವು? ಅಲ್ಲಿನ ವರದಿಗಾರಿಕೆಗೆ, ಆರೋಪ, ಸತ್ಯಾನ್ವೇಷಣೆಗಳ ಸ್ವರೂಪ ಎಂಥದ್ದು? ಪ್ರಶ್ನೆಗಳು ತುಂಬಾ ಇವೆ…
ಸುಪ್ರೀತ್
ಸುಪ್ರೀತ್ ಮತ್ತು ಶೆಟ್ಟರಿಗೆ,
ನಾಳೆ ನಿಮಗೆ ಎಲ್ಲ ಉತ್ತರ ಕೊಡ್ತೇನೆ, ಅಲ್ಲಿಯವರೆಗೆ ಮನ್ನಿಸಿ, ಪ್ಲೀಸ್.
ನಾವಡ
navadare
nimma hitavachana oppidene. naavaagiye aayke maadikonda vruttiyanna naave dveshisikolluvudu sariyalla. haagaagiye naanu nanna vrutti badalisalu prayatniside. aadre ondistu hiriyara ottaaseyinda innu ide rangadallidene. elli namma aadarshagalu doolipatavaagatto, elli namage naavu hottepaadigaagiye dudiyuttideve anno bhavane baratto adu jeeta anta nanna bhavane. pratrikodyamadalli indu alidulida aadrshagalu nanaginta hechige nimage tilidide andukollutene. ene irali innu mele jeeta annuva padavannu tiddikollutene(chendeya prabhaavadida!) andahaage aksharavihaara nannde walking ground!
ಓಕೆ ವಿನಾಯಕರೇ, ಆದರ್ಶದ ಬಗ್ಗೆ ಮಾತಾಡೋದಕ್ಕೆ ಬಹಳಷ್ಟಿದೆ. ಅದು ಇನ್ನೊಮ್ಮೆ ಮಾಡೋಣ. ನಾವು ನಡೆಯುವ ಪ್ರತಿ ನಡಿಗೆಗೂ ಒಂದು ಲಯವಿದೆ. ಅದರಲ್ಲಿ ಒಂದು ಸೊಗಸಿದೆ. ಅದನ್ನೇ ಹುಡುಕಿಕೊಳ್ಳುವುದು ಒಳ್ಳೆಯದು. ಸದಾ ಡಿಸ್ಟರ್ಬೆನ್ಸ್ ಇದ್ದದ್ದೇ. ಆದರೆ ನಮ್ಮ ಲಯ ಗುರುತಿಸುವ, ಆಸ್ವಾದಿಸುವ “ತನ’ವನ್ನು ಬಿಡಬಾರದು ಎಂಬುದು ನನ್ನ ಅನಿಸಿಕೆ.
ನಾವಡ
all the best
nivu yaru ANNO Hudukatadalli nanna gelyru nirtharagidare.
ನಕುಲ್,
ಹೆದರಿಸ್ತಿದ್ರೀ. ನನ್ನನ್ನು ಯಾರು ಅಂತಾ ಹುಡುಕ್ತಿರೋ ನಿಮ್ಮ ಗೆಳೆಯರು ಯಾರೋ? …ಏನೂ ಮಾಡಲ್ಲ ತಾನೆ….ಹ್ಹ…ಹ್ಹ.. !
ನಾವಡ