ಸಾಂಗತ್ಯಕ್ಕೆ ಭೇಟಿ ಕೊಡಿ
ಸಾಂಗತ್ಯ ಆರಂಭವಾಗಿದೆ. ನಾವೇ ಒಂದಷ್ಟು ಮಂದಿ ಕೂಡಿಕೊಂಡು ಕುಪ್ಪಳ್ಳಿಯಲ್ಲಿ ಎರಡು ದಿನಗಳ ಚಿತ್ರೋತ್ಸವ ನಡೆಸಿದೆವು. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗದಿಂದ ಬಂದಿದ್ದ ೪೦ ಮಂದಿ ಸ್ನೇಹಿತರಾದೆವು. ಖುಷಿಯಿಂದ ಕಳೆಯಿತು ಎರಡು ದಿನ. ಸುತ್ತಲೂ ಹಸಿರಿನ ಪರಿಸರ, ಜತೆಗೆ ಕಣ್ಣಿಗೆ ಕಟ್ಟುವ ಎಂಟು ಚಲನಚಿತ್ರಗಳು, ಅದರೊಂದಿಗೆ ಒಂದಿಷ್ಟು ಚರ್ಚೆ- ಎಲ್ಲವೂ ಮುಗಿದು ಮತ್ತೆ ನಾವು ನಾವು ಬದುಕಿರುವ ಊರಿನತ್ತ ಹೊರಟಾಗ ಮನಸ್ಸು ಭಾರವಾಯಿತು.
ಬೆಂಗಳೂರಿಗೆ ಪ್ರವೇಶ ದ್ವಾರವೆನ್ನುವಂತಿರುವ ‘ಜಾಲಹಳ್ಳಿ ಕ್ರಾಸ್’ ನತ್ತ ಬರುತ್ತಿದ್ದಂತೆ ಕಂಡಕ್ಟರ್ ‘ಜಾಲಹಳ್ಳಿ ಕ್ರಾಸ್, ಜಾಲಹಳ್ಳಿ ಕ್ರಾಸ್’ ಎಂದು ಕೂಗುತ್ತಾನೆ. ಅದಕ್ಕೆ ಜಯಂತ ಕಾಯ್ಕಿಣಿ ಅವರು, ‘ನಮ್ಮ ಹೆಣ ನರಕಕ್ಕೆ ಹೋಗ್ತಿದೆ’ ಎಂದು ಹೇಳುತ್ತಿದ್ದರು. ಹಾಗೇ ನಮಗೂ ಅನ್ನಿಸಿತು. ಆದರೂ ಅನಿವಾರ್ಯದ ಕುದುರೆ ಏರಿರುವ ನಮಗೆ ದುಃಖಿಸುವ ಹಕ್ಕೂ ಇಲ್ಲ !
ಅಂದ ಹಾಗೆ ಎರಡು ದಿನದ ಕಲಿಕೆ, ಖುಷಿ ಮುಂದುವರಿಯಲಿ ಎಂದು ‘ಸಾಂಗತ್ಯ’ ದ್ದೇ ಬ್ಲಾಗ್ ಆರಂಭಿಸಿದ್ದೇವೆ. ಸಿನಿಮಾ ಕುರಿತಂತೆ ಯಾವುದೇ ಬಗೆಯ ಮಾಹಿತಿ, ವಿಶ್ಲೇಷಣೆ, ಅನಿಸಿಕೆ ಎಲ್ಲವನ್ನೂ ಬರೆದು ಕಳುಹಿಸಬಹುದು. ಅದನ್ನು ನಾವು ಪ್ರಕಟಿಸುತ್ತೇವೆ. ಸಿನಿಮಾಗಳ ಬಗ್ಗೆ ಭಾಷೆಯ ನಿರ್ಬಂಧವಿಲ್ಲ .
ನಿಮ್ಮ ಬರಹಗಳಿಗೆ ನಾವು ಕಾಯುತ್ತಿರುತ್ತೇವೆ. ನಮ್ಮ ಬ್ಲಾಗ್ ಇದು www.saangatya.wordpress.com ನೀವು ಕಳುಹಿಸಬೇಕಾದ ವಿಳಾಸ www.saangatya@gmail.com.
Loading...
ಛೆ.. ನಾನು ಮಿಸ್ಸ್ ಮಡ್ಕೊಂಡ್ನಲ್ಲಾ ಸರ್ರ್…
ನನಗೆ ಹೀಗೊಂದಿದೆ ಅಂಥಾ ಗೊತ್ತೇ ಇರ್ಲಿಲ್ಲಾ.
ಟ್ರೈನ್ ಹೊದ್ಮೆಲೆ ರೈಲ್ವೆ ಸ್ಟೇಶನ್ ಗೆ ಆಟೋ ಹತ್ತಿದ ಹಾಗಾಯ್ತು……
Shishir Hegde - January 6, 2009 at 7:23 am
ನಾವಡರೆ,
ನೀವಂತೂ ಉತ್ತಮವಾದ camp ಮಾಡಿಕೊಂಡು ಬಂದಿರಿ.
ಈಗ ಸಿನೆಮಾ blog ಪ್ರಾರಂಬಿಸಿರುವದು ಸಂತಸದ ವಿಷಯ.
ನಾನೊಬ್ಬ regular visitor ಆಗಲಿರುವೆ.
ಸುನಾಥ - January 6, 2009 at 1:10 pm
ನಾವಡರೆ,
ತುಂಬಾನೇ ಖುಷಿ ಕೊಡ್ತು ನಿಮ್ಮ ಲೇಖನಗಳು .ಇಸ್ಟೊಂದು ಜನ ಕನ್ನಡ ಬ್ಲಾಗ್ಸ್ ಬರೀತಾರೆ ಅಂತ ಗೊತ್ತಿರ್ಲಿಲ್ಲ.ನಿಜವಾಗಿಯೂ ಫೀಲಿಂಗ್ ಗುಡ್ !!:)
Shayari - January 6, 2009 at 5:39 pm
ನಾವಡ ಸರ್,
ಚಿತ್ರೋತ್ಸವ ಯಶಸ್ವಿಯಾದ ಸುದ್ದಿ ಓದಿ ಸಂತೋಷವಾಯಿತು. ನಮ್ಮಂತ ಸಣ್ಣವರನ್ನೂ ಫೋನಿಸಿ ಆಹ್ವಾನಿಸಿದ ನಿಮ್ಮ ಅಕ್ಕರೆಗೆ ಅಭಿನಂದನೆಗಳು. ಅನಾರೋಗ್ಯದ ಕಾರಣ ನಾನು ಭಾಗವಹಿಸಲಿಲ್ಲ. ‘ಸಾಂಗತ್ಯ’ದ ಮುಂದಿನ ಕಾರ್ಯಕ್ರಮದಲ್ಲಿ ಖಂಡಿತ ಬಾಗವಹಿಸುತ್ತೇನೆ.
- ರಾಘವೇಂದ್ರ ಕೆಸವಿನಮನೆ.
ರಾಘವೇಂದ್ರ ಕೆಸವಿನಮನೆ - January 7, 2009 at 7:29 am
ಶಿಶಿರ್ ಹೆಗಡೆ ಅವರೇ,
ಮುಂದಿನ ಬಾರಿ ಕರೆಯುತ್ತೇನೆ. ದಯವಿಟ್ಟು ಬನ್ನಿ.
ಸುನಾಥರಿಗೆ ನಮಸ್ಕಾರ,
ನಿಮ್ಮ ಹಾರೈಕೆಗೆ ಧನ್ಯವಾದ. ಬರೀ ಭೇಟಿ ನೀಡುವುದಲ್ಲ ; ನಿಮ್ಮ ಸಿನಿಮಾ ಅನುಭವ ಹಂಚಿಕೊಳ್ಳಿ. ನಿಮಗನ್ನಿಸಿದ್ದನ್ನು ಬರೆಯಿರಿ. ಎಲ್ಲರೂ ಸಿನಿಮಾದ ಬಗ್ಗೆ ಬರೆಯಬೇಕೆಂದೇ ಆರಂಭಿಸಿದ ಬ್ಲಾಗ್.
ಶಾಯರಿ
ನನ್ನ ಬ್ಲಾಗ್ ಗೆ ಭೇಟಿ ಕೊಟ್ಟಿದ್ದಕ್ಕೆ ಧನ್ಯವಾದ. ಹೀಗೇ ಬರ್ತಾ ಇರಿ.
ಕೆಸವಿನಮನೆ
ಅನುಭವ ಪಡೆಯುವುದರಲ್ಲಿ ಚಿಕ್ಕವರು-ದೊಡ್ಡವರು ಎನ್ನುವುದಿಲ್ಲ ಎಂಬುದು ನನ್ನ ಅನಿಸಿಕೆ. ಮುಂದಿನ ಬಾರಿ ಬರುವುದನ್ನು ತಪ್ಪಿಸಬೇಡಿ. ನಮಸ್ಕಾರ
ನಾವಡ
navada - January 7, 2009 at 9:44 am
sir namaskara, sangatyada moolaka namage chitra noduv kale kalisikottidiri, dhanyvadagalu…
raviraj - January 7, 2009 at 12:40 pm
sir namaskara, sangatyada moolaka namage chitra noduv kale kalisikottidiri, dhanyvadagalu…..
raviraj - January 7, 2009 at 12:41 pm
hats off to you enthusiasm!! hopefully I can make it next time for saangatya…
Srimatha - January 11, 2009 at 8:46 pm