ಹೊಸ ಪದ್ಯ-ಮತ್ತೆ ಗಾಳಿ ಬೀಸುವವರೆಗೆ
ನೆನಪು ಹಳೆಯದಾಯಿತು…
ಇಬ್ಬರೂ ಕೂಡಿ ಇಟ್ಟ ಹೆಜ್ಜೆಗೂ
ವಯಸ್ಸಾಯಿತು
ಬರುವ ಮುಂದಿನ ಗಾಳಿಗೆ
ಇದರ ಆಯಸ್ಸು ತೀರಬಹುದು
ಹೊಸ ಗುರುತು ಮೂಡಿಸುವ
ಹುಮ್ಮಸ್ಸು ಇಬ್ಬರಲ್ಲೂ ಉಳಿದಿಲ್ಲ
ಹಳೆಯದ್ದರ ಜಾಡು ಹಿಡಿದು
ಹೊರಟಿದ್ದೇವೆ, ಏನೂ ಸಿಗುತ್ತಿಲ್ಲ
ನಾವು ಬದುಕಿದ್ದೇವೆ ಎಂಬುದಕ್ಕೆ
ಪ್ರಮಾಣಪತ್ರಗಳ ಬಿಟ್ಟರೆ
ಬೇರೇನೋ ಉಳಿದಿಲ್ಲ
ಇಬ್ಬರೂ ಕಲೆತು ಹರಟಿದ
ಕಲ್ಲು ಬೆಂಚುಗಳು ಜೀರ್ಣಗೊಂಡಿವೆ
ಸದಾ ಗುರಾಯಿಸುತ್ತಿದ್ದ ಕಾವಲುಗಾರನದ್ದೂ
ಹೊಸ ಪೀಳಿಗೆ, ಅಪರಿಚಿತ
ಉಸುಕಿನ ಮೇಲೆ
ನಡೆದೂ ನಡೆದೂ ಅಭ್ಯಾಸ
ಇತಿಹಾಸ ಸೃಷ್ಟಿಸುವ ಹಠವೂ ಇರಲಿಲ್ಲ
ಇಬ್ಬರೂ ಕೊಟ್ಟದ್ದು-ಪಡೆದದ್ದಕ್ಕೆ
ಸಾಕ್ಷ್ಯ ಉಳಿದಿಲ್ಲ
ಒಲವು ಸಾಕ್ಷ್ಯವಾಗುವುದಿಲ್ಲ
ಎಣ್ಣೆ ಮುಗಿಯುವವರೆಗೆ
ದೀಪ ಆರುವುದಿಲ್ಲ
ಮತ್ತಷ್ಟು ದೂರ ನಡೆಯಬಲ್ಲೆವು
ಅಲ್ಲಿಯವರೆಗೆ…
ಮೂಡಿದರೆ ನಾಲ್ಕಾರು ಹೆಜ್ಜೆ
ಮತ್ತೆ ಗಾಳಿ ಬೀಸುವವರೆಗೆ
Loading...
ಚೆಂದದ, ಗತ್ತಿನಿಂದ ಓದಿಸಿಕೊಳ್ಳುವ ಅಷ್ಟೇ ಸರಳವಾದ ಕವನ
ಶ್ರೀದೇವಿ ಕಳಸದ - ಅಗಸ್ಟ್ 22, 2008 at 5:21 pm
ನಾವಡ ಅವರೆ…
ಚಂದ ಚಂದ ಚಂದದ ಸಾಲುಗಳು.
ಉಸುಕಿನಲ್ಲಿ ನಡೆದ ಹೆಜ್ಜೆಗಳ ಈ ಸಾಲುಗಳು ಹಸಿನೆಲದಲಿ ಮೂಡಿದ ಹೆಜ್ಜೆಗಳ ಹಾಗೆ ಮನದಲ್ಲಿ ಊರಿಕೊಂಡುಬಿಡುವ ಹಾಗಿವೆ.
ಶಾಂತಲಾ ಭಂಡಿ - ಅಗಸ್ಟ್ 22, 2008 at 6:00 pm
oho, odtha iddini navadre.
sudhanva deraje - ಅಗಸ್ಟ್ 23, 2008 at 5:04 am
ನೀವಿನ್ನೂ ಗಾಳಿ ಬೀಸುವ ನಿರೀಕ್ಷೆಯಲ್ಲಿದ್ದೀರಿ. ನಮಗಂತೂ ಒಂದೊಳ್ಳೆ ಕವಿತೆಯ ಕಂಪು ಸವಿದಂದಾಯಿತು…
ಜಿತೇಂದ್ರ - ಅಗಸ್ಟ್ 23, 2008 at 9:55 am
ಶ್ರೀದೇವಿ,
ಥ್ಯಾಂಕ್ಸ್.
ಶಾಂತಲಾ ಭಂಡಿಯವರೆ ಮೆಚ್ಚುಗೆಗೆ ಧನ್ಯವಾದ.
ಸುಧನ್ವಾ,
ನೀನು ಓದ್ತಿದ್ದರೆ ಸಾಕು. ಥ್ಯಾಂಕ್ಸ್
ಜಿತೇಂದ್ರ, ನಿನಗೂ ಥ್ಯಾಂಕ್ಸ್.
ನಾವಡ
navada - ಅಗಸ್ಟ್ 23, 2008 at 10:48 am
ನಾವಡರೆ,
ಬಹಳ matter-of-fact tone.
ಮಾಗಿದ ದನಿ.
ಇದಕ್ಕೆ ಭಾರದ ಪದಗಳ ಪರಿವೆ ಇಲ್ಲ.
ಇರಬೇಕಾಗಿಯೂ ಇಲ್ಲ.
ಯೋಚನೆ ಸಾಗ್ತಲೇ ಇದೆ…
Tina - ಅಗಸ್ಟ್ 23, 2008 at 4:27 pm
navuda sir…naage nim mele hotttekicchaagta ide…ashtu mudd mudddagi bandide kavana:)
ನವಿಲಗರಿ - ಅಗಸ್ಟ್ 24, 2008 at 2:37 pm
chendhadha kavana.
sudesh - ಅಗಸ್ಟ್ 24, 2008 at 4:04 pm
ಟೀನಾರೇ,
ಧನ್ಯವಾದರೀ. ನಿಮ್ಮ ಅಭಿಪ್ರಾಯಕ್ಕೆ ಮತ್ತೊಮ್ಮೆ ಥ್ಯಾಂಕ್ಸ್.
ನವಿಲಗರಿಯವರೇ,
ಮೆಚ್ಚುಗೆಗೆ ಥ್ಯಾಂಕ್ಸ್. ಹೀಗೆ ಹೊಟ್ಟೆ ಉರಿಯುತ್ತಿರಲಿ ಸದಾಶಯದಲ್ಲಿ.
ಸುಧೇಶ್,
ಬಹಳ ದಿನಗಳಾಯ್ತು ಈ ಕಡೆ ಬಂದು. ಗರಿ ಮುರಿ ಈರುಳ್ಳಿ ಪಕೋಡ ಮಾಡ್ಲಿಕ್ಕೆ ಹೋದವರು ಮತ್ತೆ ಬಂದಿರಲಿಲ್ಲ. ಬಂದಿದ್ದಕ್ಕೆ, ಪದ್ಯ ಓದಿ ಅಭಿಪ್ರಾಯ ತಿಳಿಸಿದ್ದಕ್ಕೆ ಥ್ಯಾಂಕ್ಸ್.
ನಾವಡ
navada - ಅಗಸ್ಟ್ 25, 2008 at 10:03 am
ನಾವಡರೇ,
ಕವಿತೆ ಇಷ್ಟವಾಯಿತು.
ಹೀಗೇ ಬದುಕಿರಬಲ್ಲೆವು… ಅಲ್ಲಿಯವರೆಗೆ
ಮೂಡಿದರೆ ನಾಲ್ಕಾರು ಹೆಜ್ಜೆ ಮತ್ತೆ ಗಾಳಿ ಬೀಸುವವರೆಗೆ…
ಸಾಲುಗಳು ಇಡಿಯ ಕವಿತೆಯ ಆಶಯವನ್ನು ಮತ್ತೆ ಸಮರ್ಥವಾಗಿ ಎತ್ತಿ ಹಿಡಿಯುತ್ತವೆ.
ಓದಿ ಖುಶಿಯಾಯಿತು.
ಪ್ರೀತಿಯಿಂದ
ಸಿಂಧು.
sindhu - ಅಗಸ್ಟ್ 26, 2008 at 1:45 am
ನಾನು ಕನ್ನಡ ಹನಿಗಳ ಬಳಗದಿಂದ ವಿನಂತಿಸಿಕೊಳ್ಳುತ್ತಿರುವುದೇನೆಂದರೆ, ನಮ್ಮ ಕನ್ನಡ ಹನಿಗಳು ಹಾಸ್ಯ್, ಕವನ, ಹನಿಗವನ ಇನ್ನೂ ಹತ್ತು ಹಲವನ್ನು ಹೊಂದಿದೆ.
http://kannadahanigalu.com/
ನೀವು ಮೀಕ್ಷಿಸಿ, ನಿಮ್ಮ ಬ್ಲಾಗ್ನಲ್ಲಿ ಪ್ರಕಟಿಸುವಿರಾ, ಹಾಗೆಯೇ ಕನ್ನಡ ಹನಿಗಳಲ್ಲಿಯು ನಿಮ್ಮ ಬ್ಲಾಗ್ನ್ನು ಪ್ರಕಟಿಸುತ್ತೇವೆ.
ದಯವಿಟ್ಟು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಾಗಳಿಗೆ ನಮಗೆ ಬರೆದು ತಿಳಿಸಿ.
ಧನ್ಯವಾದಗಳೊಂದಿಗೆ…..
Kannadahanigalu - ಅಗಸ್ಟ್ 29, 2008 at 11:34 am
ಸಿಂಧು ಮೇಡಂ,
ಧನ್ಯವಾದ. ನಿಮ್ಮ ಅಭಿಪ್ರಾಯದಿಂದ ಉಲ್ಲಸಿತನಾಗಿದ್ದೇನೆ. ಹೀಗೇ ಭೇಟಿ ನೀಡ್ತಾ ಇರಿ.
ನಮಸ್ಕಾರ
ನಾವಡ
navada - ಅಗಸ್ಟ್ 29, 2008 at 12:45 pm
Beautiful!
sunaath - ಅಗಸ್ಟ್ 30, 2008 at 10:34 am
ಸುನಾಥರೇ,
ಧನ್ಯವಾದ.
ನಾವಡ
navada - ಅಗಸ್ಟ್ 30, 2008 at 1:01 pm
nOvina oLadani adagiruva kavana manamuttitu….
adrallOO
ಮತ್ತಷ್ಟು ದೂರ ನಡೆಯಬಲ್ಲೆವು
ಅಲ್ಲಿಯವರೆಗೆ…
ಮೂಡಿದರೆ ನಾಲ್ಕಾರು ಹೆಜ್ಜೆ
ಮತ್ತೆ ಗಾಳಿ ಬೀಸುವವರೆಗೆ
S U P E R !
ವೇಣು ವಿನೋದ್. - ಅಗಸ್ಟ್ 31, 2008 at 11:08 am
ವೇಣು,
ಬಹಳ ದಿನಗಳ ಮೇಲೆ ಬಂದಿದ್ದಕ್ಕೆ ಖುಷಿಯಾಯಿತು. ನನ್ನ ಸಾಲುಗಳು ಇಷ್ಟವಾಗಿದ್ದರೆ ಥ್ಯಾಂಕ್ಸ್.
ನಾವಡ
navada - September 1, 2008 at 2:18 pm
ನಾವಡರೆ,
ಹೀಗೆ ಗೂಗುಲ್ ನಲ್ಲಿ ಹೂಡುಕುತ್ತಿರಲು ನಿಮ್ಮ ಬ್ಲಾಗ್ ಸಿಕ್ಕಿತು. ಒ೦ದು ಓದಿದ೦ತೆ ಮತ್ತೆ ಮತ್ತೆ ಓದುವ೦ತೆ ಪ್ರೇರೆಪಿಸಿತು.
ಉತ್ತಮ ಕವನ….
ಆತ್ಮೀಯತೆಯಿ೦ದ
ರಜನಿ.ಭಟ್
rajani,abudhabi - September 2, 2008 at 11:14 am
ಉಸುಕಿನ ಮೇಲೆ
ನಡೆದೂ ನಡೆದೂ ಅಭ್ಯಾಸ
ಇತಿಹಾಸ ಸೃಷ್ಟಿಸುವ ಹಠವೂ ಇರಲಿಲ್ಲ
ಇಬ್ಬರೂ ಕೊಟ್ಟದ್ದು-ಪಡೆದದ್ದಕ್ಕೆ
ಸಾಕ್ಷ್ಯ ಉಳಿದಿಲ್ಲ
ee saalu thumba ishta aaytu.
usukina melina hejju gurutinanate
saakshyavirade aLisi hoda kodu-koLLuvike…
thumbaa khushi aayt
vijayraj - September 5, 2008 at 12:19 pm
ವಿಜಯ್ ಅವರೆ,
ಧನ್ಹವಾದ ಅಭಿಪ್ರಾಯಕ್ಕೆ.
ರಜನಿ ಮೇಡಂ,
ಧನ್ಯವಾದ, ನಿಮಗೆ ಬಂದು ಅಭಿಪ್ರಾಯಿಸಿದ್ದಕ್ಕೆ. ಹೀಗೇ ಬರ್ತಾ ಇರಿ.
ನಾವಡ
navada - September 5, 2008 at 5:36 pm