ಚೆಂಡೆಮದ್ದಳೆ
ಕಡಲಿಗೆ ಹೆಬ್ಬಾಗಿಲುಗಳಿಲ್ಲ…

ಬಿಕ್ಕಿದ ಸಾಲುಗಳು-ಮೂರನೇ ಕಂತು

ಅವಳು ಹಿಡಿದ
ಛತ್ರಿಯ
ರಂಧ್ರಗಳಲ್ಲಿ
ತೂರಿ ಬರುತ್ತಿದ್ದ
ಕಾಮನಬಿಲ್ಲು
ನೆಲದ ಮೇಲೆ
ಹರಡಿಕೊಳ್ಳುತ್ತಿತ್ತು
ಬಣ್ಣವಿರಲಿಲ್ಲ
***
ಚಿಕ್ಕದೊಂದು ಪತ್ರದಲ್ಲಿ
ನನ್ನ ಹೆಸರು ಬರೆದು
ಕೆಳಗೆ ನಿನ್ನ ಪ್ರೀತಿಯ
ಎಂದು ಮೊಹರು ಒತ್ತಿ
ಎಲ್ಲೋ ಕಳೆದು ಹೋದ ಹೊತ್ತು

ಆಲಿಕಲ್ಲು, ಕರಗಿ ನೀರಾಗಲಿ
ಮತ್ತೆ ಮಳೆ ಬರಲಿ
****
ಕಣಿವೆಯಲ್ಲಿ
ನಡೆಯುತ್ತಿದ್ದೆ
ಗಾಢಾಂಧ ಕತ್ತಲು

ನನ್ನೊಳಗೂ ಇಲ್ಲದಂಥ
ದಿವ್ಯ ಮೌನ
ನಾನು ಹುಡುಕುತ್ತಿದ್ದುದು
ಸಿಕ್ಕಿತು ಎಂದು ತುಂಬಿಕೊಳ್ಳಲು
ಬೊಗಸೆ ಹಿಡಿದೆ
ಸಿಕ್ಕಿದ ಸಂಭ್ರಮದಲ್ಲಿ

ಬೆರಳುಗಳ ಮಧ್ಯೆ
ನುಸುಳಿದ್ದು ತಿಳಿಯಲಿಲ್ಲ

ಅಷ್ಟರವರೆಗೂ ಸುಮ್ಮನಿದ್ದ ಕತ್ತಲು
ಕೇಳಿತು, ಏನು ಪಡೆದೆ ?
ಒಂದಿಷ್ಟು ಮೌನ ಎಂದೆ
ಎಲ್ಲಿಂದ ಎಂದು ಮತ್ತೆ ಕೇಳಿತು
ನಿನ್ನಿಂದ ಅಂದೆ,
ಅದಕ್ಕೆ ಅದು
ಉತ್ತರ ಸರಿಪಡಿಸಿತು
ಶೂನ್ಯದಿಂದ !
***

5 Responses to “ಬಿಕ್ಕಿದ ಸಾಲುಗಳು-ಮೂರನೇ ಕಂತು”

  1. ಸಾಲುಗಳು ಚೆನ್ನಾಗಿವೆ. ಕೊನೆಯ ಪದ್ಯದ ಸಾಲುಗಳು ಇಷ್ಟವಾದವು.
    ರಘುರಾಂ

  2. ಪ್ರಿಯ ನಾವಡರೇ,

    ಬಿಕ್ಕಿದ ಸಾಲುಗಳು ತುಂಬ ಇಂಟರೆಸ್ಟಿಂಗ್ ಆಗಿವೆ.
    ನೆಲದ ಮೇಲೆ ಹರಡಿಕೊಳ್ಳುತ್ತಿತ್ತು
    ಬಣ್ಣವಿರಲಿಲ್ಲ,

    ಆಲಿಕಲ್ಲು ಕರಗಿ ನೀರಾಗಲಿ
    ಮತ್ತೆ ಮಳೆ ಬರಲಿ…

    ಇಷ್ಟವಾದವು.

    ವಂದನೆಗಳು,
    ಸಿಂಧು

  3. ಸೊಗಸಾಗಿದೆ ಬಿಕ್ಕಿದ ಸಾಲುಗಳ ಬಣ್ಣ. ಇಷ್ಟವಾಯಿತು.
    -ಜಿತೇಂದ್ರ

  4. ರಘುರಾಂ ಅವರಿಗೆ ಧನ್ಯವಾದ. ಹೀಗೇ ಬರುತ್ತಾ ಇರಿ.
    ಸಿಂಧು ಮೇಡಂ, ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ. ಹೀಗೇ ಬರ್ತಾ ಇರಿ, ಹುರಿದುಂಬಿಸುತ್ತಿರಿ.
    ಜಿತೇಂದ್ರ, ನಮಸ್ಕಾರ.
    ನಾವಡ

  5. ನಾವಡರೆ,
    ಕವನ ತುಂಬಾ ಇಷ್ಟವಾಯಿತು.


Leave a Reply