ಚೆಂಡೆಮದ್ದಳೆ
ಕಡಲಿಗೆ ಹೆಬ್ಬಾಗಿಲುಗಳಿಲ್ಲ…

ಬಿಕ್ಕಿದ ಸಾಲುಗಳು-ಮತ್ತೊಂದು ಕಂತು

ಆಗಸದಲ್ಲಿ ಚಂದಿರ
ಬಂದಿದ್ದಾನೆ
ಅಂಗಳದಲ್ಲಿ ಮಲ್ಲಿಗೆ
ಅರಳಿದೆ
ಅವಳ ಕಾಯುವಿಕೆಯಲ್ಲಿ
ಕಣ್ಣುಗಳು
ಸೋತಿವೆ
ಇನ್ನು ಕಣ್ಣು ಮುಚ್ಚುತ್ತೇನೆ
ಕನಸಿನಲ್ಲಾದರೂ
ಆಕೆಯ ಹೆಜ್ಜೆ ತೋರಬಹುದು !
***
ಬೆಳಕು
ಪಡೆದವರೆಲ್ಲಾ
ಮೋಹಿಗಳಾದರು
ಅದ ನೀಡಿದವ ಮಾತ್ರ
ನಿರ್ಮೋಹಿಯಾಗಿಯೇ
ಉಳಿದ
***
ಗುಲಾಬಿ ತೋಟದ
ಹುಡುಗಿ
ಮುಳ್ಳನ್ನೇ
ಹೊದ್ದು ಬಂದಳು
ಅವಳಿಗಾಗಿ
ಆತ
ಮುಳ್ಳನ್ನೇ ಪ್ರೀತಿಸಿದ !
***
ನನ್ನ
ಬೊಗಸೆ ತುಂಬಾ
ನಿರೀಕ್ಷೆಗಳ
ಮೊಗ್ಗುಗಳಿವೆ
ಪರಿಮಳಿಸಲು
ಅವಳ ಒದ್ದೆ ಕಣ್ಣುಗಳ
ಪ್ರೀತಿ ಬೇಕು
***
ಹೆಜ್ಜೆಯ
ಜಾಡು
ಅರಿಯುವ ಹಂಬಲ
ಮೀನ ಪಾದಕ್ಕೂ
ಗೆಜ್ಜೆ ಕಟ್ಟುತ್ತೇನೆ
***
ಸೊಗಸಿಗೆ
ಉದಾಹರಣೆಯಾಗಿ
ನಿಂತವಳ
ಕಣ್ತುಂಬಿಕೊಳ್ಳುವೆ
ಮತ್ತೇನನ್ನೂ
ನೋಡುವುದಿಲ್ಲ !

15 Responses to “ಬಿಕ್ಕಿದ ಸಾಲುಗಳು-ಮತ್ತೊಂದು ಕಂತು”

  1. ಹೆಜ್ಜೆಯ
    ಜಾಡು
    ಅರಿಯುವ ಹಂಬಲ
    ಮೀನ ಪಾದಕ್ಕೆ
    ಗೆಜ್ಜೆ ಕಟ್ಟುತ್ತೇನೆ
    - Wah NavaDArE, nAnantU nimma fan agibiTTiruve!!
    - Chetana

  2. ಹೌದು, ಗೆಜ್ಜೆ ಕಟ್ಟುವ ಪ್ರತಿಮೆ ಹಾಗೆಯೇ ಬೆಳಕು ನೀಡಿದವನ ನಿರ್ಮೋಹದ ಭಾವ, ತುಂಬ ಸುಂದರ ಕಲ್ಪನೆಗಳು.

  3. YOOHOOOOO!!!
    ಇವತ್ ನೋಡಿ ನಾವಡರೆ, ಮುಗ್ಯಾಂಬೋ ಖುಶ್ ಹುವಾ. ಆಮೇಲೆ ಇದಕ್ಕೆ ಬಿಕ್ಕಿದ ಸಾಲುಗಳು ಅನ್ನೋ ಟೈಟಲ್ಲು ಸುತರಾಂ ಹೊಂದಲ್ಲ. ಈ ಕವಿತೆಯ ಯಾವುದಾದರು ಸಾಲನ್ನೆ ಆಯ್ದುಕೊಂಡರೇನೆ ಚೆನ್ನಾಗಿರತ್ತೆ ಅನ್ನಿಸ್ತು.
    -ಟೀನಾ.

  4. ಚೇತನಾ ಮತ್ತು ಚಕೋರರಿಗೆ
    ನಮಸ್ಕಾರ. ನಿಮ್ಮ ಅಭಿಮಾನದ ನುಡಿಗೆ ಧನ್ಯವಾದ.ಪ್ರೀತಿ ಇರಲಿ. ಹೀಗೇ ಬರ್ತಾ ಇರಿ.
    ಟೀನಾರೇ,
    ನಿಮ್ಮ ಆದೇಶ ಪಾಲಿಸಿದ್ದೇನೆ. ನಿಮಗೆ ಖುಷಿಯಾದರೆ ನನಗೂ ಖುಷಿ. ಬಿಕ್ಕಿದ ಸಾಲುಗಳು ಎಂದು ಇಟ್ಟಿದ್ದಕ್ಕೆ ಒಂದೇ ಕಾರಣ-ಇವು ಪ್ರತ್ಯೇಕ ಪದ್ಯಗಳಾಗುವ ಹಂಬಲದಿಂದ ಹೊರಟು ಅಲ್ಲಿಗೇ ನಿಂತವು. ಅದಕ್ಕೇ ಹಾಗೆ ಕರೆದೆ. ನೀವು ಹೇಳಿದ ಸಲಹೆನೂ ಇಷ್ಟವಾಯಿತು. ಮೇಡಮ್, ಹೀಗೇ ಆರ್ಡರ್ ಮಾಡ್ತಾ ಇರಿ…
    ನಾವಡ

  5. ಬಿಕ್ಕಳಿಕೆಯ ಎಲ್ಲ ಸಾಲುಗಳೂ ಖುಷಿಕೊಟ್ಟವು ನಾವಡ್ರೇ,

    ಅದರಲ್ಲೂ ಇದು ಸುಪರ್ಬ್

    ಇನ್ನು ಕಣ್ಣು ಮುಚ್ಚುತ್ತೇನೆ
    ಕನಸಿನಲ್ಲಾದರೂ
    ಆಕೆಯ ಹೆಜ್ಜೆ ತೋರಬಹುದು

  6. ಎಲ್ಲ ಸಾಲುಗಳು ಚಂದ ಇವೆ. ಖುಶಿಯಾಯ್ತು ಓದಿ.

    ’ಹೆಜ್ಜೆಯ
    ಜಾಡು
    ಅರಿಯುವ ಹಂಬಲ
    ಮೀನ ಪಾದಕ್ಕೂ
    ಗೆಜ್ಜೆ ಕಟ್ಟುತ್ತೇನೆ ’

    ಸಖತ್ :)

  7. ನಾವಡ,

    ಆಗೀಗ ಗಜಲ್- ಶಾಯರಿಗಳನ್ನೋದುವ ನನಗೆ ಅವು ಉಂಟುಮಾಡುವ ಭಾವುಕತೆಯನ್ನೇ ಈ ನಿಮ್ಮ ಸಾಲುಗಳು ತಂದುಕೊಟ್ಟವು. ನಿರಂತರ ಪ್ರವಾಸ, ಉಪನ್ಯಾಸಗಳ ನಡುವೆ ಇಂಥ ಓದು ಒಂದು ಅದ್ಭುತ ಫೀಲ್.

    ’ಹೆಜ್ಜೆಯ
    ಜಾಡು
    ಅರಿಯುವ ಹಂಬಲ
    ಮೀನ ಪಾದಕ್ಕೂ
    ಗೆಜ್ಜೆ ಕಟ್ಟುತ್ತೇನೆ ’

    ನಿಮ್ಮ ಹಾಡಿನ ಜಾಡು ಹರಿಯುವ ಬಗೆಗೆ ಗೆಜ್ಜೆ ಕಟ್ಟಬೇಕು!

    ವಂದೇ,
    ಚಕ್ರವರ್ತಿ ಸೂಲಿಬೆಲೆ

  8. ವೇಣು, ಮನಸ್ವಿನಿ, ಚಕ್ರವರ್ತಿಯವರಿಗೆ ಧನ್ಯವಾದ. ನಿಮ್ಮ ಅಭಿಪ್ರಾಯ ಪದ್ಯ ಬರೆಯುವ ನನ್ನ ಉತ್ಸಾಹಕ್ಕೆ ಗೆಜ್ಜೆ ಕಟ್ಟಿತು.
    ನಾವಡ

  9. ಬಹಳ ಚೆನ್ನಾಗಿ ಬರೆದಿದ್ದೀರಿ. ಓದಿ ಖುಷಿಯಾಯ್ತು.

  10. ಸುನಾಥ ಕಾಕಾರಿಗೆ
    ನಮಸ್ಕಾರ. ನಿಮ್ಮ ಬೇಂದ್ರೆಯೆಂಬ ಸಂಪಿಗೆಯ ಪರಿಮಳವನ್ನು ಘಮಘಮಿಸುತ್ತಿರುವುದು ಕಂಡು ಖುಷಿಯಾಯಿತು. ನನ್ನ ಬಿಕ್ಕಿದ ಸಾಲುಗಳಿಗೆ ನೀಡಿದ ಅಭಿಪ್ರಾಯ ಸಹ ಹುಮ್ಮಸ್ಸು ತುಂಬಿತು. ಧನ್ಯವಾದ.
    ನಾವಡ

  11. ಸಖತ್ ಸಾಲುಗಳು!! ಇಲ್ಲಿ ಬರೆದಿರೋ ಮಿಕ್ಕ ಹಲವರಂತೆ ನಂಗೂ ಗೆಜ್ಜೆ ಸಾಲು ತುಂಬಾಆಆಆ ಇಷ್ಟ ಆಯ್ತು

  12. ಶ್ರೀಯವರೇ,
    ಮೆಚ್ಚಿದ್ದಕ್ಕೆ ಧನ್ಯವಾದ.
    ನಾವಡ

  13. navada adbuta maraya,tooooooo gooooood loves u r blogs man they r all natural soooo real.wow thanks fr introducing me to the new world.
    love
    murali

  14. navad odde kannugala preeti sudhasharma chavatthi yavara modala kavana sankalana.adu nannanna bahala kadisittu.adralli oddekannugala preeti ennuva kavana beautifull.mattada salugalanna ninna ninna kavitheyalli odidaga 10varsha hinde hogibittiddene.
    love
    murali

  15. ಮುರಳಿ,
    ನನ್ನ ಬ್ಲಾಗ್ ಗೆ ಬಂದಿದ್ದಕ್ಕೆ ಥ್ಯಾಂಕ್ಸ್.ಅಭಿಪ್ರಾಯಿಸಿದ್ದಕ್ಕೆ ಮತ್ತೊಂದು ಥ್ಯಾಂಕ್ಸ್. ನೀನು ಹೇಳಿದ್ದು ನಿಜ.ಸುಧಾ ಶರ್ಮರ ಆ ಕವನ ನನಗೂ ಖುಷಿ ಕೊಟ್ಟಿದೆ. ಆ ಒದ್ದೆ ಕಣ್ಣುಗಳು ಎನ್ನವುದರಲ್ಲೇ ಒಂದು ಲವಲವಿಕೆಯಿದೆ. ಹೀಗೆ ಬರ್ತಾ ಇರು.
    ನಾವಡ


Leave a Reply