ಬಹಳ ತಿಂಗಳ ನಂತರ ಮತ್ತೆ ಬ್ಲಾಗ್ ಗೆ ಹೊಕ್ಕಿದ್ದೇನೆ. ಯಾಕೋ ಬರೆಯುವುದನ್ನೇ ನಿಲ್ಲಿಸಬೇಕೆನಿಸಿತ್ತು, ನಿಲ್ಲಿಸಿದ್ದೆ. ಈ ಮಧ್ಯೆ ಒಂದಿಷ್ಟು ಪುಸ್ತಕ ಓದಿದೆ, ಮತ್ತೊಂದಿಷ್ಟು ಆರ್ಟ್ ಎಕ್ಸಿಬಿಷನ್ ನೋಡಿದೆ, ಅದಕ್ಕಿಂತ ಹೆಚ್ಚು ಎನಿಸುವಷ್ಟು ಸಿನಿಮಾ ನೋಡಿದೆ, ಹಲವಾರು ವಿಭಿನ್ನ ವ್ಯಕ್ತಿಗಳನ್ನು ಭೇಟಿಯಾದೆ. ಬದುಕು ಮತ್ತಷ್ಟು ಮಜಾ ಎನಿಸಿದೆ. ಈಗ ಮತ್ತೆ ಒಂದಿಷ್ಟು ಬರೆಯಬೇಕೆಂದೆನಿಸಿದೆ, ಶುರು ಮಾಡಿದ್ದೇನೆ ಈ ಚಿತ್ರದ ಕುರಿತಾದ ಬರಹದ ಮೂಲಕ.
ಕನ್ನಡದಲ್ಲಿ 19 ನೇ ದಶಕದಲ್ಲಿ ಸಿನಿಮಾ ಸೇರಿದಂತೆ ಬಹುತೇಕ ಸೃಜನಶೀಲ ನೆಲೆಗಳ ಕಥಾವಸ್ತುವಾಗಿದ್ದ ಮಧ್ಯಮವರ್ಗ ಈಗ ಬಹುಪಾಲು ಕಳೆದೇ ಹೋಗಿದ್ದಾನೆ. 80 ರ ಆರಂಭದಲ್ಲಿ ಬಡವ ನಮ್ಮ ಸಿನಿಮಾಗಳಲ್ಲಿ ಹೇಗೆ ಪಾತ್ರವಾಗಿದ್ದನೋ, ಹಾಗೇ ಮಧ್ಯಮ ವರ್ಗದ ಶ್ರೀ ಸಾಮಾನ್ಯ ಪಾತ್ರವಾಗಿದ್ದ. ಈಗ ಮೇಲ್ಮಧ್ಯಮ ವರ್ಗವೂ ಸಿನಿಮಾಗಳ ವಸ್ತುವಿಗೆ ಎಟುಕುತ್ತಿಲ್ಲ.

ತಮಿಳಿನಲ್ಲಿ ಇದಕ್ಕೆ ವಿರುದ್ಧವಾದ ಪ್ರಯತ್ನ ನಡೆಯುತ್ತಿದೆ. ಜನಪ್ರಿಯ ನೆಲೆಯಲ್ಲೇ ಬಹಳ ಭಿನ್ನವಾದ ಚಿತ್ರಗಳು ಬರುತ್ತಿವೆ. ಅದರಲ್ಲೂ ಕೆಳವರ್ಗದ (ಇಲ್ಲಿ ಈ ಪದವನ್ನು ಜಾತಿ ಸೂಚಕವಾಗಿ ಬಳಸುತ್ತಿಲ್ಲ, ಬದಲಾಗಿ ಆರ್ಥಿಕ ನೆಲೆಯಲ್ಲಿ ಬಳಸುತ್ತಿರುವೆ), ದನಿಯಿಲ್ಲದವರ, ಕರಗಿ ಹೋದವರ ಚಹರೆಗಳನ್ನು ಹುಡುಕುವ ಪ್ರಯತ್ನ ನಡೆಯುತ್ತಿರುವುದು ಒಂದು ಒಳ್ಳೆಯ ಸೂಚನೆಯೂ ಹೌದು.
ಕನ್ನಡ ಚಿತ್ರರಂಗದ ನಾಯಕ ಮಹಾಶಯ, ಯಾವ ವರ್ಗವನ್ನೂ ಸ್ಪಷ್ಟವಾಗಿ ಪ್ರತಿನಿಧಿಸದೇ ತ್ರಿಶಂಕು ಸ್ವರ್ಗದಲ್ಲಿರುವ ಹೊತ್ತಿನಲ್ಲಿ ನನಗೆ ಈ ಬೆಳವಣಿಗೆ ಅತ್ಯಂತ ವಿಶೇಷವೆನಿಸಿತು. ಈ ಮಾತಿಗೆ ಪುಷ್ಟಿ ನೀಡಿದ್ದು ಮೊನ್ನೆಯಷ್ಟೇ ನೋಡಿದ “ಮರೀನಾ’ ಚಿತ್ರ. ಚಿತ್ರ ನಿರ್ದೇಶಕ ಪಾಂಡಿರಾಜ್. “ಪಸಂಗ’ ಇವರ ಮೊದಲ ಚಿತ್ರ. ಈ ಚಿತ್ರ ೨೦೧೦ ರ ತಮಿಳಿನ ಅತ್ಯುತ್ತಮ ಚಿತ್ರವೆಂದು ರಾಷ್ಟ್ರೀಯ ಪ್ರಶಸ್ತಿ ಪಡೆಯಿತು. “ಮರೀನಾ’ ದ ವಿಶೇಷತೆ ವಿವರಿಸುವ ಮುನ್ನ ನಿರ್ದೇಶಕನ ಬಗೆಗೆ ಇನ್ನೆರಡು ವಿವರ ನೀಡಬೇಕು. ಪಾಂಡಿರಾಜ್ ರ ಮೂರನೇ ಚಿತ್ರ ಈ “ಮರೀನಾ’. ಖ್ಯಾತ ನಿರ್ದೇಶಕ ಚೇರನ್ ರಲ್ಲಿ ಸಹಾಯಕ ನಿರ್ದೇಶಕರಾಗಿದ್ದವರು. ಇವರ ಎರಡನೇ ಚಿತ್ರ “ವಂಶಂ’. (more…)
ಬಹಳ ತಿಂಗಳ ನಂತರ ಮತ್ತೆ ಬ್ಲಾಗ್ ಗೆ ಹೊಕ್ಕಿದ್ದೇನೆ. ಯಾಕೋ ಬರೆಯುವುದನ್ನೇ ನಿಲ್ಲಿಸಬೇಕೆನಿಸಿತ್ತು, ನಿಲ್ಲಿಸಿದ್ದೆ. ಈ ಮಧ್ಯೆ ಒಂದಿಷ್ಟು ಪುಸ್ತಕ ಓದಿದೆ, ಮತ್ತೊಂದಿಷ್ಟು ಆರ್ಟ್ ಎಕ್ಸಿಬಿಷನ್ ನೋಡಿದೆ, ಅದಕ್ಕಿಂತ ಹೆಚ್ಚು ಎನಿಸುವಷ್ಟು ಸಿನಿಮಾ ನೋಡಿದೆ, ಹಲವಾರು ವಿಭಿನ್ನ ವ್ಯಕ್ತಿಗಳನ್ನು ಭೇಟಿಯಾದೆ. ಬದುಕು ಮತ್ತಷ್ಟು ಮಜಾ ಎನಿಸಿದೆ. ಈಗ ಮತ್ತೆ ಒಂದಿಷ್ಟು ಬರೆಯಬೇಕೆಂದೆನಿಸಿದೆ, ಶುರು ಮಾಡಿದ್ದೇನೆ ಈ ಚಿತ್ರದ ಕುರಿತಾದ ಬರಹದ ಮೂಲಕ. ಕನ್ನಡದಲ್ಲಿ 19 ನೇ ದಶಕದಲ್ಲಿ ಸಿನಿಮಾ ಸೇರಿದಂತೆ ಬಹುತೇಕ ಸೃಜನಶೀಲ ನೆಲೆಗಳ ಕಥಾವಸ್ತುವಾಗಿದ್ದ ಮಧ್ಯಮವರ್ಗ [...]